ತಿಪಟೂರು: ವಿಶ್ವ ಕರ್ಮ ರತ್ನ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ, ಡಾ! ಭಾಸ್ಕರಾಚಾರ್ ರವರಿಗೆ . ಹಾಗೂ ಕೇರ ಸಂಘದ ಜಿಲ್ಲಾ ಗೌರವ್ಯಾಧ್ಯಕ್ಷರು ಭಾಸ್ಕರ್ ಪತ್ರಿಕೆ ಮತ್ತು ಯೂಟ್ಯೂಬ್ ಚಾನೆಲ್ ಸಂಪಾದಕರವರಿಗೆ ತಿಪಟೂರು ದಂಡಾಧಿಕಾರಿಯದ ಮೋಹನ್ ಕುಮಾರ್ ಅವರು ಜುಲೈ 1 ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ನಗರದ ಗ್ರಾಂಡ್ ಹೋಟೆಲ್ ನಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ತಿಪಟೂರು ನಗರದಲ್ಲಿ 30 ವರ್ಷಗಳ ಕಾಲ ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿದ ಭಾಸ್ಕರ್ ಅವರಿಗೆ ವಿವಿಧ ಕ್ಷೇತ್ರಗಳಿಂದ ಹಲವಾರು ಪ್ರಶಸ್ತಿಗಳು ಲಭಿಸಿದ್ದು. ಪತ್ರಿಕಾ ರಂಗದಲ್ಲಿ ಹಾಗೂ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ
ಈ ಸಂದರ್ಭದಲ್ಲಿ ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘದ ಪದಾಧಿಕಾರಿಗಳು ಇನ್ನೂ ಮುಂತಾದವರು ಉಪಸ್ಥಿರಿದ್ದರು.
ವರದಿ:ಮಂಜುನಾಥ ಡಿ,ತಿಪಟೂರು
