ತಿಪಟೂರು: ತಾಲೂಕಿನ ಬಿಳಿಗೆರೆ ತಿಮ್ಲಾಪುರ ಮೂಲದ 103 ವರ್ಷದ ಪಾರ್ವತಮ್ಮ ಅಜ್ಜಿ ತಮ್ಮ ಅದ್ಭುತ ಧೈರ್ಯ ಮತ್ತು ಭಕ್ತಿಯಿಂದ ಇಡೀ ದೇಶದ ಗಮನ ಸೆಣದಿದ್ದಾರೆ ದೇಹದ ಸೈನಿಕರ ಸುಖ ಶಾಂತಿ ಗಾಗಿ ಅವರು ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಪಾದಯಾತ್ರೆ ಕೈಗೊಂಡಿದ್ದು ಅವರ ದೈವ ಭಕ್ತಿಯೊಂದಿಗೆ ದೇಶಭಕ್ತಿಯು ಸಹ ತೋರುತ್ತದೆ
ಈ ಮೂರು ವರ್ಷದ ಹಿಂದೆ ಸಹ ಇವರು ಜೇನುಕಲ್ಲು ಸಿದ್ದೇಶ್ವರ ಮತ್ತು ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್ ಪಾರ್ವತಮ್ಮ ಅಜ್ಜಿಯವರನ್ನು ಭೇಟಿ ಮಾಡಿದ್ದರು ಅಜ್ಜಿಯ ಯಾತ್ರೆಯ ಉದ್ದೇಶವೇನೆಂದರೆ ಈಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸದಾ ಕಾಲ ಪ್ರಧಾನಿ ಆಗಿರಲಿ ಎಂದು ಯೋಧರು ತಮ್ಮ ಕುಟುಂಬ ಮತ್ತು ಬಂಧು ಬಳಗವನ್ನು ಬಿಟ್ಟು ದೇಶದ ರಕ್ಷಣೆಗೆ ಜೀವ ಮೀಸಲಾಗಿಸುವುದರಿಂದ ಅವರ ಒಳಿತಿಗಾಗಿ ಪ್ರಾರ್ಥನೆ ಮಾಡುವ ಉದ್ದೇಶದಿಂದ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮಾಡಿರುವ ಕಾನೂನುಗಳನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಯಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ.
ಈ ಪಾರ್ವತಮ್ಮ ಅವರ ಆತ್ಮಸ್ಥೈರ್ಯ ದೈವಭಕ್ತಿ ದೇಶಭಕ್ತಿ ಹಾಗೂ ಅವರ ಜೀವನೋತ್ಸಾಹ ಸಮಾಜಕ್ಕೆ ಪ್ರೇರಣೆಯಾಗಿದೆ, ಆರೋಗ್ಯ ಮತ್ತು ಸಕಾರಾತ್ಮಕ ಮನೋಭಾವ ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ ಇಷ್ಟೊಂದು ಇಳಿಯ ವಯಸ್ಸಿನಲ್ಲಿಯೂ ಸಹ ಅಜ್ಜಿಯವರು ಉತ್ಸಾಹದ ಜೀವನ ನಡೆಸುತ್ತಿರುವುದು ಇಂದಿನ ಯುವ ಜನತೆಗೆ ಮಾದರಿಯಾಗಿದೆ. ಪಾರ್ವತಮ್ಮ ಅಜ್ಜಿಗೆ ತಿಪಟೂರಿನ ಭಾಸ್ಕರ ಪತ್ರಿಕಾ ಬಳಗದ ವತಿಯಿಂದ ತುಂಬು ಹೃದಯದ ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ಶುಭ ವಿಶ್ವಕರ್ಮ

