
ಕೊಪ್ಪಳ: ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಸ್ಕೂಟಿಗೆ ಕಾರ್ ಢಿಕ್ಕಿ ಹೊಡೆದ ಕಾರಣ ಶಿಕ್ಷಕಿಯೊ ಬ್ಬರು ಮೃತಪಟ್ಟ ಘಟನೆ ಜುಗಿದೆ. ನಗರದ ಕಿನ್ನಾಳ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಎಸ್ ಎಫ್ ಐ ಶಿಕ್ಷಕಿ ಉಷಾ ರಾಣಿ ಬಡಿಗೇರ್ ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಶಾಲೆಯ ಶಿಕ್ಷಶಿಕ್ಷಕಿಯ ಸ್ಕೂಟಿಗೆ, ಕಾರ್ ಡಿಕ್ಕಿ ಹೊಡೆದ ಪರಿಣಾಮ, ಸ್ಥಳದಲ್ಲಿ ಖಾಸಗಿ ಶಾಲೆಯ ಶಿಕ್ಷಕಿ ಮೃತಪಟ್ಟಿದ್ದಾರೆ. ಕಾರ್ ಚಾಲಕ ಪರಾರಿಯಾಗಿದ್ದಾನೆ. ಶಾಲೆಯಿಂದ
ಮಗಳೊಂದಿಗೆ ಮನೆಗೆ ಹೊರಟಿದ್ದ ಶಿಕ್ಷಕಿ ಮೃತಳಾಗಿದ್ದು, ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಪ್ಪಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
