
ಸಿಂಧನೂರು: ಅ.26 ನಗರದ ಸುಕಾಲಪೇಟೆ ನಿವಾಸಿ ಮಧು ಶ್ರೀ ಮಹಿಳಾ ತೃತೀಯ ಲಿಂಗಿ ವಿಭಾಗ ( ಕೋಟಾ) ದಲ್ಲಿ ಪೋಲಿಸ್ ಪೆದೆಯಾಗಿ ಆಯ್ಕೆಯಾಗಿದ್ದಾಳೆ.ಇವರ ಆಯ್ಕೆ ಸಾಮಾನ್ಯರಿಗೂ ಹುಬ್ಬೆರಿಸುವಂತೆ ಮಾಡಿ ನಾವು ಯಾವುದರಲ್ಲೂ ಕಡಿಮೆ ಇಲ್ಲ ಪೋಲಿಸ್ ಆಗಲು ಇತರರಿಗೆ ಸ್ಪೂರ್ತಿ ತುಂಬುವಂತಾಗಿದೆ .ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗುತ್ತಿದೆ.
ಕಾರಟಗಿ ಹತ್ತಿರದ ತೊಂಡಿಹಾಳ ಮೂಲದ ಇವರು ದಶಕಗಳ ಹಿಂದೆ ಸಿಂಧನೂರು ನಗರಕ್ಕೆ ಮಾರುತಿಯಾಗಿದ್ದ ಇತ ಮಧುಶ್ರೀ ಯಾಗಿ ತೃತೀಯ ಲಿಂಗಿ ಆದ ನಂತರ ಕೆ ಪಿ ಟಿ ಸಿ ಎಲ್ ನಲ್ಲಿ ಹಲವು ಬಾರಿ ಅರ್ಜಿ ಸಲ್ಲಿಸಲಾಗಿತ್ತು.ಪೋಲಿಸ್ ಇಲಾಖೆಯ ಶೇ 10 % ರಷ್ಟು ರಲ್ಲಿ ಅವಕಾಶದಲ್ಲಿ ಅರ್ಜಿ ಸಲ್ಲಿಸಿ ಬೆಂಗಳೂರು ವಿಭಾಗದಲ್ಲಿ ಶೇ ಅಂಕವಾರು 34.75 % ರಲ್ಲಿ ಪೋಲಿಸ್ ಆಗಿ ಆಯ್ಕೆಯಾಗಿದ್ದು ತುಂಬಾ ಸಂತೋಷ ತಂದಿದೆ. ಈ ಆಯ್ಕೆ ಎಲ್ಲರಿಗೂ ಮಾದರಿಯಾಗಲಿದೆ.ಸಮಾಜದಲ್ಲಿ ವಿಭಿನ್ನವಾಗಿ ನೋಡುವವರಿಗೆ ಇದು ಕಲಿಕೆಯಾಗಿದೆ. ದೈಹಿಕ ಪರೀಕ್ಷೆ, ಮೆಡಿಕಲ್ ,ಠಾಣೆ ತನಿಖೆ ಮುಗಿದಿದೆಂದು ಪತ್ರಿಕೆಗೆ ತಿಳಿಸಿದರು.
