ಮುರಗೋಡದಲ್ಲಿ ಹಾಡು ಹಗಲೇ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ

ಭಾಸ್ಕರ ಪತ್ರಿಕೆ
0

 


ಸವದತ್ತಿಹಾಡು ಹಗಲೇ ಯುವಕನ ಹತ್ಯೆ, ಮುರಗೋಡ ಗ್ರಾಮದಲ್ಲಿ ಸೋಹೇಲ್‌ ಅಹಮ್ಮದ್‌ ಕಿತ್ತೂರು (17) ಎಂಬ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ, ಸೋಹೇಲ್‌ ಅಹಮ್ಮದ್‌ ಕಿತ್ತೂರು ಎಗ್‌ರೈಸ್‌ ಅಂಗಡಿ ನಡೆಸುತಿದ್ದು, ಹಿಂದೆ ಇವನಿಗೆ ಯಾರೋ ಜೀವ ಬೆದರಿಕೆ ಹಾಕಿದ್ದರು, ಈ ಬೆದರಿಕೆ ಬಗ್ಗೆ ಠಾಣೆಯಲ್ಲಿ ದೂರು ಕೊಡಲಿಲ್ಲ ಎಂಬುದು ಜನರ ಮಾತಾಗಿದೆ, ಮುರಗೋಡ ಗ್ರಾಮದ ಹೊರವಲಯದಲ್ಲಿ ಯುವಕನನ್ನು ಮನಬಂದಂತೆ ಇರಿದು ಕೊಂದಿದ್ದಾರೆ, ಇದು ಐವರ ಕೃತ್ಯವೆಂದು ಹೇಳಲಾಗುತ್ತಿದ್ದು ಸ್ಥಳಕ್ಕೆ ಮುರಗೋಡ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸುತಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*