ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ವತಿಯಿಂದ 2025ನೇ ಸಾಲಿನ ನೂತನ ದಿನದರ್ಷಿಕೆ (ಕ್ಯಾಲೆಂಡರ್)‌ ಬಿಡುಗಡೆ ಮತ್ತು ಗಣ್ಯರಿಗೆ ಸನ್ಮಾನ

ಭಾಸ್ಕರ ಪತ್ರಿಕೆ
0



ತಿಪಟೂರು: ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ವತಿಯಿಂದ  ದಿನಾಂಕ 25/120/2024ನೇ ಬುಧವಾರದಂದು, ನಗರದ ಕಲ್ಪತರು ಗ್ರಾಂಡ್ಸ್‌ ಹೊಟೇಲ್‌ ನಲ್ಲಿ 2025ನೇ ಸಾಲಿನ ನೂತನ ದಿನದರ್ಷಿಕೆ (ಕ್ಯಾಲೆಂಡರ್)‌ ಬಿಡುಗಡೆ ಮತ್ತು ಗಣ್ಯರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್‌. ಗಣೇಶ್‌ ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು‌ ಕ.ಸಾ.ಪ ಕೋಶಾಧ್ಯಕ್ಷರಾದ ಮಡೆನೂರು ಸೋಮಶೇಖರ್, ಉಪನ್ಯಾಸಕರಾದ ಎಲ್.‌ ಎಂ ವೇಂಕಟೇಶ್‌, ಬೂಸಾ ರಾಜಣ್ಣ, ಆಲ್‌ ಇಂಡಿಯಾ ರೈಲ್ವೆ ಟ್ರ್ಯಾಕ್‌ ಮೆಂಟೆನರ್‌ ಯೂನರಯನ್‌ ರಾಷ್ರ್ಟೀಯ ಪ್ರಧಾನ ಕಾರ್ಯದರ್ಶಿಗಳಾದ ಕಾಂತರಾಜು ಎ.ವಿ, ಕಲ್ಪತರು ಗ್ರಾಂಡ್ಸ್‌ ಹೊಟೇಲ್‌ ಮಾಲಿಕರಾದ ನಿಜಗುಣ, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ಗೌರವಾಧ್ಯಕ್ಷರಾದ ಡಾ. ಭಾಸ್ಕರ್‌, ಉಪಾಧ್ಯಕ್ಷರಾದ ಡಾ. ಪಿ. ಶಂಕರಪ್ಪ ಬಳ್ಳೇಕಟ್ಟೆ, ಪ್ರಧಾನ ಕಾರ್ಯದರ್ಶಿ ಧರಣೇಶ್‌ ಕುಪ್ಪಾಳು ನಡೆಸಿಕೊಟ್ಟರು.

ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದಂತಹ ಮಹನೀಯರಾದ

  • ಡಾ. ಬಿ. ಸಂತೋಷ್‌, ದಂತ ವೈದ್ಯರು ತಿಪಟೂರು
  • ನವೀನ್‌ ಕುಮಾರ್‌ ಎಂ.ಎನ್‌, ಇನ್ಪುಟ್‌ ಕೋಡಿನೇಟರ್‌, ಪವರ್‌ ಟಿವಿ
  • ಡಾ. ಮಂಜುನಾಥ್‌ ಎಸ್.ಕೆ, ಉಪನ್ಯಾಸಕರು ಮತ್ತು ಸಾಹಿತಿಗಳು
  • ಪುಟ್ಟರಾಜು .ಎಂ, ಯಕ್ಷಗಾನ ಕಲಾವಿದರು
  • ನಾಗತಿಹಳ್ಳಿ ಕೃಷ್ಣಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕರು
ಇವರುಗಳಿಗೆ ಗೌರವಿಸಿ ಸನ್ಮಾನಿಸಲಾಯಿತು.


ಕಾರ್ಯಕ್ರಮಕ್ಕೆ ಪದಾಧಿಕಾರಿಗಳಾದ ಶ್ರೀಮತಿ ಕುಸುಮ, ಶ್ರೀಮತಿ ಶುಭ ವಿಶ್ವಕರ್ಮ, ಶ್ರೀಮತಿ ತ್ರಿವೇಣಿ ಸುಂದರ್‌, ಶ್ರೀಮತಿ ಸರ್ವಮಂಗಳ, ಮನು, ಮಂಜುನಾಥ್‌ ಗುರುಗದಹಳ್ಳಿ, ಟಿ. ರಾಜು ಬೆಣ್ಣೆನಹಳ್ಳಿ, ತಿಮ್ಲಾಪುರ ಸ್ವಾಮಿ, ಡಿ. ಮಂಜುನಾಥ್‌, ಹಿರಿಯ ವಕೀಲರಾದ ಸದಾಶಿವಯ್ಯ, ಅಬಕಾರಿ ನಿವೃತ್ತ ಅಧಿಕಾರಿ ನಿಜಗುಣ, ಗುರುಪ್ರಸಾದ್‌, ಪಾರ್ಶ್ವನಾಥ ಜೈನ್‌ ಇದ್ದರು, ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶುಭ ವಿಶ್ವಕರ್ಮ ಮತ್ತು ಸ್ವಾಗತ, ನಿರೂಪಣೆ ಹಾಗೂ ವಂದನಾರ್ಪಣೆಯನ್ನು ಡಾ. ಪಿ. ಶಂಕರಪ್ಪ ಬಳ್ಳೇಕಟ್ಟೆ ನೆರವೇರಿಸಿಕೊಟ್ಟರು, ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*