ವಿಶ್ವಕರ್ಮ ಸಮಾಜದ ಹಿರಿಯರು, ಹಲವಾರು ಸಂಘ ಸಂಸ್ಥೆಗಳ ಹಿತೈಷಿಗಳು ಆದ ಶ್ರೀ ಶಿವಣ್ಣ ಬಡಿಗೇರ ಅವರು ಜೀವನದ ಆಯುಷ್ಯದಲ್ಲಿ ಮುಕ್ಕಾಲು ಭಾಗ ವಿಶ್ವಕರ್ಮ ಸಮಾಜಕ್ಕೆ ಅರ್ಪಿಸಿದ ನಾಯಕ ಅವರ ಅಗಲಿಕೆ ಸಮಾಜಕ್ಕೆ ಬಹುದೊಡ್ಡ ನಷ್ಟ ತಮ್ಮ 93 ನೇ ವಯಸ್ಸಿನಲ್ಲಿ ಸಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವದು ಮತ್ತು ಮಾರ್ಗದರ್ಶನ ನೀಡುತ್ತಿದ್ದ ಹಿರಿಯ ಜೀವ ಹ್ರದಯಾಘಾತದಿಂದ ನಿಧನರಾಗಿದ್ದು ಇವರ ಈ ಅಗಲಿಕೆಗೆ ಕರ್ನಾಟಕ ವಿಶ್ವಕರ್ಮ ಜನ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ಸೋಮಶೇಖರ್(ಕನ್ನಡಸೋಮು), ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ.ಭಾಸ್ಕರಾಚಾರ್, ರಾಜ್ಯಕಾರ್ಯದರ್ಶಿ ಪರಮೇಶ್ವರಾಚಾರ್, ತುಮಕೂರು ಜಿಲ್ಲಾ ಮಹಿಳಾ ಘಟಕದ ಉಪಾಧ್ಯಕ್ಷರಾದ ಶ್ರೀಮತಿ ಶುಭ ವಿಶ್ವ ಕರ್ಮ ಹಾಗೂ ಸಂಘದ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

