ಭಗವದ್ಗೀತಾ ಕಂಠಪಾಠ ಸ್ಪರ್ಧೆ ಯಶಸ್ವಿ

ಭಾಸ್ಕರ ಪತ್ರಿಕೆ
0







ಹರಿಯಂ ಗೀತಾ ಜಯಂತಿ ಪ್ರಯುಕ್ತ ಡಿವೈನ್ ಡ್ರಾಪ್ಸ್ ವತಿಯಿಂದ ಅಂತರಾಷ್ಟ್ರೀಯ ಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆ ಆನ್ಲೈನ್ ಮುಖಾಂತರ ನೆರವೇರಿತು ಶ್ರೀ ಬ್ರಹ್ಮಾನಂದ ಭಾರತೀಯ ಸ್ವಾಮೀಜಿಯವರ ಕೃಪ ಆಶೀರ್ವಾದದಿಂದ ಈ ಕಾರ್ಯಕ್ರಮವು ಜರುಗಿತು ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀಮತಿ ಜ್ಯೋತಿ ರಾಘು ರವರು ಮೈಸೂರಿನಿಂದ ಹಾಗೂ ಶ್ರೀಮತಿ ಭಾರತಿ ಪ್ರಕಾಶ್ ತಿಪಟೂರಿನಿಂದ ಆಗಮಿಸಿ ಸ್ಪರ್ಧಿಗಳನ್ನು ಉದ್ದೇಶಿಸಿ ಮಾತನಾಡಿದರು. 
ಈ ಕಾರ್ಯಕ್ರಮದಲ್ಲಿ ಸರಿಸುಮಾರು 230 ಸ್ಪರ್ಧಿಗಳು ಭಾಗವಹಿಸಿದ್ದರು, ಕಾರ್ಯಕ್ರಮದ ಆಯೋಜಕರು ಆದಂತಹ ಶ್ರೀಮತಿ ಅನುಷಾ ಕೃಷ್ಣರವರು ಸ್ಪರ್ಧಿಗಳನ್ನು ಕುರಿತು ಹಿತ ನುಡಿಗಳಿಂದ ನಮ್ಮ ಧಾರ್ಮಿಕತೆ ಸಂಸ್ಕೃತಿ ಹಾಗೂ ಸನಾತನವನ್ನು ಮುಂದಿನ ಪೀಳಿಗೆಗೆ ರವಾನಿಸುವಲ್ಲಿ ಈ ಭಗವದ್ಗೀತಾ ಕಲಿಕೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂಬ ಸ್ಪೂರ್ತಿದಾಯಕ ಮಾತುಗಳಿಂದ ಕೃಷ್ಣನಿಗೆ ಆರತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 
ಕಾರ್ಯಕ್ರಮದಲ್ಲಿ ಕೆನಡಾದ ಆಂಟಾರಿಯೋ, ಆಸ್ಟ್ರೇಲಿಯಾ ಸಿಂಗಾಪುರ್, ಮೆಲ್ಬನ್, ಥೈಲ್ಯಾಂಡ್ & ಮಲೇಶಿಯಾದಂತಹ ಇತರೆ ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಕೊಯಂಬತ್ತೂರು, ನೆಲ್ಲೂರು, ನವದೆಹಲಿ, ಕಡಪ, ವಿಶಾಖಪಟ್ಟಣ, ಬೆಂಗಳೂರು, ಚಳ್ಳಕೆರೆ, ಮುಧೋಳ, ಗಜ್ವಲ್, ಹೈದರಾಬಾದ್, ಉಡುಪಿ, ಚೆನ್ನೈ, ಪುತ್ತೂರು, ವಿಜಯವಾಡ ಇನ್ನೂ ಅನೇಕ ಭಾಗದಿಂದ ಸ್ಪರ್ಧಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*