ಇತ್ತೀಚೆಗೆ ವೈರಲ್ ಆದ ಯೂಟ್ಯೂಬ್ ವೀಡಿಯೊದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧ ‘ಗದ್ದರ್’ (ದೇಶದ್ರೋಹಿ) ಎಂದು ವ್ಯಂಗ್ಯವಾಡಿದ್ದ ಹಾಸ್ಯನಟ ಕುನಾಲ್ ಕಮ್ರಾ ಅವರು ಇದ್ದ ಖಾರ್ನ ಹೋಟೆಲ್ ಒಂದನ್ನು ಶಿವಸೇನೆ ಕಾರ್ಯಕರ್ತರು ಭಾನುವಾರ ಧ್ವಂಸಗೊಳಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಘಟನೆಯು ಹೋಟೆಲ್ ಯುನಿಕಾಂಟಿನೆಂಟಲ್ ನಲ್ಲಿ ನಡೆದಿದ್ದು, ಅಲ್ಲಿ ಕಮ್ರಾ ಅವರ ಪ್ರದರ್ಶನವನ್ನು ರೆಕಾರ್ಡ್ ಮಾಡಲಾಗಿದೆ. ಶಿವಸೇನೆ ಕಾರ್ಯಕರ್ತರು ಸ್ಥಳಕ್ಕೆ ನುಗ್ಗಿ, ಆವರಣವನ್ನು ಲೂಟಿ ಮಾಡಿದ್ದಾರೆ. ದಿಲ್ ತೋ ಪಾಗಲ್ ಹೈ ಚಿತ್ರದ ಮಾರ್ಪಡಿಸಿದ ಹಿಂದಿ ಹಾಡಿನಿಂದ ಕಮ್ರಾ ಶಿಂಧೆ ಅವರನ್ನು ಅಣಕಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ದಾಳಿ ನಡೆದಿದೆ.
ಈ ಮಧ್ಯೆ ಶಿವಸೇನೆ ಶಾಸಕ ಮುರ್ಜಿ ಪಟೇಲ್ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಕಮ್ರಾ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ ಮತ್ತು ಎರಡು ದಿನಗಳಲ್ಲಿ ಹಾಸ್ಯನಟ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

