ತಿಪಟೂರು: ಸುಕ್ಷೇತ್ರದ ಶ್ರೀ ಸಿದ್ದರಾಮೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಉಪಾನ್ಯಾಸಕರಾದ ಶ್ರೀ ಡಿ. ಎಸ್ ರಾಜಶೇಖರ್ ರವರು ಇಂದು ಬೆಳಿಗ್ಗೆ ವಾಯು ವಿಹಾರಿಸುವಾಗ ಹೃದಯಾಘಾತ ದಿಂದ ದೈವಾದೀನವಾಗಿರುತ್ತಾರೆ. ಮೃತರ ಪಾರ್ಥೀವ ವನ್ನು ತಿಪಟೂರಿನ ಕಲ್ಪತರು ಕಾಲೇಜಿನ ಹಿಂಭಾಗದ ಸ್ಟೆಲ್ ಮೇರಿ ಶಾಲೆಯ ರಸ್ತೆ 2ನೇ ಕ್ರಾಸ್ ವಿದ್ಯಾ ನಗರದ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕಾಗಿ 11 ಗಂಟೆಯವರೆಗೆ ಇಟ್ಟಿರುತ್ತಾರೆ.ನಂತರ ಅವರ ಹುಟ್ಟೂರಾದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕುಪ್ಪೂರ ಹತ್ತಿರ ದಿಬ್ದಹಳ್ಳಿಯಲ್ಲಿ ಮದ್ಯಾಹ್ನ 1 .30 ರ ಸಮಯದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.
ಇವರಿಗೆ ಬಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರು ಮತ್ತು ಕೆ.ರಾ ತಾಲೂಕು ಘಟಕದ ಗೌರವಾಧ್ಯಕ್ಷರಾದ ಡಾ. ಭಾಸ್ಕರ್, ಭಾಸ್ಕರ ಪತ್ರಿಕಾ ಬಳಗ ಮತ್ತು ಕೆ.ರಾ ತಾಲೂಕು ಘಟಕದ ಸರ್ವಸದಸ್ಯರು ಶ್ರಧಾಂಜಲಿ ಸಲ್ಲಿಸಿದ್ದಾರೆ.

