ಬಾಂಗ್ಲಾದೇಶದ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ತಿಪಟೂರಿನಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ

ಭಾಸ್ಕರ ಪತ್ರಿಕೆ
0


ತಿಪಟೂರು: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಖಂಡಿಸಿ ನಗರದಲ್ಲಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ ನಡೆಸಿ ತಾಲ್ಲೂಕು ಉಪವಿಭಾಗಾಧಿಕಾರಿಗಳ ಮೂಲಕ ಕೇಂದ್ರಸರ್ಕಾರಕ್ಕೆ ಮನವಿಪತ್ರಸಲ್ಲಿಸಲಾಯಿತು.
ಗ್ರಾಮದೇವತೆ ಶ್ರೀ ಕೆಂಪಮ್ಮದೇವಿ ದೇವಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಕೋಡಿಸರ್ಕಲ್, ದೊಡ್ಡಪೇಟೆ,ಬಿ.ಹೆಚ್ ರಸ್ತೆ ಮೂಲಕಸಾಗಿ ಶ್ರೀಜಯದೇವ ವಿದ್ಯಾರ್ಥಿನಿಲಯದ ಆವರಣದಲ್ಲಿ ಸಮಾವೇಷ ನಡೆಸಲಾಯಿತು.ಪ್ರತಿಭಟನಾನಿರತರು ಬಾಂಗ್ಲಾದೇಶದ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.


ಪ್ರತಿಭಟನೆ ನೇತೃತ್ವ ವಹಿಸಿದ ಕುಪ್ಪೂರು ತಮ್ಮಡಿಹಳ್ಳಿ ವಿರಕ್ತ ಮಠದ ಪೀಠಾಧ್ಯಕ್ಷರಾದ ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಮಹಾಸ್ವಾಮೀಜಿಗಳು ಹಿಂದೂ ಸಮಾಜ ತಮ್ಮ ಉಳಿವಿಗಾಗಿ ಶತೃಗಳ ಬಗ್ಗೆ ಜಾಗೃತಿಯಾಗುವ ಅಗತ್ಯವಿದೆ.
ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ, ಜಿಹಾದಿಶಕ್ತಿಗಳ ನಡೆಯುತ್ತಿರುವ ದೌರ್ಜನ್ಯವನ್ನ ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.
ಹಿಂದೂ ಸಮಾಜದಲ್ಲಿಮನೆಗೊಬ್ಬ ಭಗತ್ ಸಿಂಗ್ ಹುಟ್ಟಬೇಕು ಎಂದು ಕರೆನೀಡಿದರು
ತಿಪಟೂರು ಗುರುಕುಲಾನಂದಾಶ್ರಮದ ಶ್ರೀಶ್ರೀ ಇಮ್ಮಡಿಕರಿಬಸವ ದೇಶೀಕೇಂದ್ರ ಮಹಾಸ್ವಾಮೀಜಿಗಳ ಮಾತನಾಡಿ ವಿಶ್ವದಲ್ಲಿಯೇ ಶಾಂತಿ ಸೌರ್ಹಾರ್ದತೆ ಕಾಪಾಡುವ ಹಿಂದೂಸಮಾಜದ ಮೇಲೇ ದುಷ್ಟಶಕ್ತಿಗಳ,ದೌರ್ಜನ್ಯ ಮಾಡುತ್ತಿದ್ದಾರೆ,ಬಾಂಗ್ಲಾದೇಶದಲ್ಲಿ ಅತ್ಯಚಾರ, ಅನಾಚಾರ ಮಿತಿಮೀರಿದೆ,ಇಸ್ಕಾನ್ ಮಂದಿರ ದುರ್ಗಾಮಂದಿರ ಸೇರಿದಂತೆ ಹಿಂದೂಗಳ ಮನೆಮಠಗಳು ಧ್ವಂಸಮಾಡಲಾಗಿದೆ, ಭಾರತ ಸರ್ಕಾರ ಸಂಕಷ್ಟದಲ್ಲಿ ಇರುವ ಹಿಂದೂಗಳ ನೆರವಿಗೆ ದಾವಿಸಬೇಕು, ಎಂದು ತಿಳಿಸಿದರು.



ಕಾರ್ಯಕ್ರಮದಲ್ಲಿ ಮಾರ್ಗಸೂಚಿ ಭಾಷಣಕಾರರಾಗಿ ಆಗಮಿಸಿದ ಉಮೇಶ್ ಮಾತನಾಡಿ ಬಾಂಗ್ಲಾದೇಶದಲ್ಲಿ ಯೂನಿಸ್ ಖಾನ್ ನೇತೃತ್ವದ ತಾತ್ಕಾಲಿಕ ಸರ್ಕಾರದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ
ಜಿಹಾದಿಗಳು,ಹಿಂದೂ ಸಮಾಜವನ್ನ ನಾಶಮಾಡಲು ಹೊರಡುತ್ತಿದ್ದು, ನಮ್ಮ ಸಂತಸಮಾಜವೇ ಬೀದಿಯಲ್ಲಿ ಹೋರಾಟಕಿಳಿದಿದೆ,1952 ರಲ್ಲಿ 52 %ಇದ್ದ ಹಿಂದೂಗಳು 7% ಇಳಿದಿದೆ,
ಸರ್ಕಾರಿ ಪ್ರಯೋಜಿತ ಲೂಟಿನಡೆಯುತ್ತಿದೆ.ಸರ್ಕಾರವೇ ಬಯೋತ್ವದನೆಗೆ ಕುಮ್ಮಕು ನೀಡುತ್ತಿದೆ.
ಚಿನ್ಮಯಿ ಕೃಷ್ಣದಾಸ್ ರವರನ್ನ ಭಯೋತ್ಪಾದಕ ರಂತೆ ಬಿಂಬಿಸಲಾಗುತ್ತಿದೆ, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತಹಿಂದೂಗಳ ಮೇಲೆ ನಿರಂತರದೌರ್ಜನ್ಯ ನಡೆಯುತ್ತಿದೆ, ಮಾನವಹಕ್ಕುಗಳ ಹರಣವಾಗುತ್ತಿದೆ, ವಿಶ್ವಸಂಸ್ಥೆ ಮಾನವಹಕ್ಕುಗಳ ರಕ್ಷಣ ಸಮಿತಿ ಮೌನವಾಗಿರುವುದು ಆತಂಕಕ್ಕೆ ಕಾರಣವಾಗಿದೆ, ಪ್ರತಿಯೋಬ್ಬ ಹಿಂದೂವೂ ಸಹ ಬಾಂಗ್ಲಾದೇಶದ ಹಿಂದೂಗಳ ಪರವಾಗಿ ನಿಲ್ಲಬೇಕು.
ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್.ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಂಗರಾಜು.ಬಿಸ್ಲೇಹಳ್ಳಿ ಜಗಧೀಶ್. ಮಾಜಿ ನಗರಸಭೆ ಅಧ್ಯಕ್ಷ ರಾಮ್ ಮೋಹನ್ ಸದಸ್ಯರಾದ ಶಶಿಕಿರಣ್. ಬಜರಂಗದಳ ಮುಖಂಡ.ಹಾವೇನಹಳ್ಳಿ ನಾಗೇಶ್, ಭಾಸ್ಕರ ಪತ್ರಿಕೆಯ ಪ್ರಧಾನ ಸಂಪಾದಕರಾದ ಹಿರಿಯ ಪತ್ರಕರ್ತ ಡಾ.ಭಾಸ್ಕರ್‌, ಅರುಣ್‌, ಭೂಷಣ್‌, ರವೀಂದ್ರ ತೆಗ್ಗಿನಮನಿ, ಭಾಸ್ಕರ ಟಿವಿ ಯೂಟ್ಯೂಬ್ ವಾಹಿನಿ ಸುದ್ದಿ ವಾಚಕರಾದ ಶ್ರೀಮತಿ ಶುಭ ವಿಶ್ವಕರ್ಮ, ಮುಂತ್ತಾದವರು ಉಪಸ್ಥಿತರಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*