ತಿಪಟೂರು: ತಾಲ್ಲೂಕಿನ ಹಾಸನ ಸರ್ಕಲ್ ಭಾಸ್ಕರ ಪತ್ರಿಕೆ ಕಚೇರಿ ಮುಂಭಾಗ ಡಾ. ಎಪಿಜೆ ಅಬ್ದುಲ್ ಕಲಾಂ ರವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.
ಸಂಘದ ಗೌರವಾಧ್ಯಕ್ಷರ ಡಾ. ಭಾಸ್ಕರ್ ಮಾತನಾಡಿ. ಡಾ. ಎಪಿಜೆ ಅಬ್ದುಲ್ ಕಲಾಂ ರವರ ಜನನ ಅಕ್ಟೋಬರ್ 15 .1931 ರಾಮೇಶ್ವರಂ. ಭಾರತ ಮರಣ ಜುಲೈ 27.2015. ಶಿಲ್ಲಾಂಗ್. ನಲ್ಲಿ. ಇವರು. ಭಾರತೀಯ ವಿಜ್ಞಾನಿ. ಮತ್ತು ರಾಜಕಾರಣಿಯಾಗಿದ್ದು ಹಾಗೂ ಭಾರತದ ಕ್ಷಿಪಣಿ ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅವರು2002 ರಿಂದ.2007ರ ವರೆಗೆ ಭಾರತದ ಅಧ್ಯಕ್ಷರಾಗಿದ್ದರು ಅವರ ವೈಜ್ಞಾನಿಕ ಸಾಧನೆಗಳು ಮತ್ತು ಜನಪ್ರಿಯತೆಯು ಅವರಿಗೆ. ಮಿಸೈಲ್ ಮ್ಯಾನ್. ಮತ್ತು ಪಿಪಲ್ಸ್ ಪ್ರೆಸಿಡೆಂಟ್ ಎಂಬ ಬಿರುದಿನೊಂದಿಗೆ ದೇಶಕ್ಕೆ ಅಪ್ರತಿಮ ಕೊಡುಗೆಗಳನ್ನು ತಂದುಕೊಟ್ಟ ದೇಶ ಕಂಡ ಅಪ್ರತಿಮ ನಾಯಕ ಎಂದರು.
ಸಂಘದ ಪದಾಧಿಕಾರಿಗಳಾದ ಗಣೇಶ್ ಅಧ್ಯಕ್ಷರು, ಶಂಕ್ರಪ್ಪ ಬಳೆಕಟ್ಟೆ ಉಪಾಧ್ಯಕ್ಷರು, ಧರಣೇಶ್ ಕುಪ್ಪಾಳು ಪ್ರಧಾನ ಕಾರ್ಯದರ್ಶಿ, ನಿರ್ದೇಶಕರಾದ ರಾಜಣ್ಣ ಬೆಣ್ಣೆನಹಳ್ಳಿ, ಮಂಜು ಗುರುಗದಹಳ್ಳಿ, ಶುಭ ವಿಶ್ವಕರ್ಮ, ಬೂಸಾ ರಾಜಣ್ಣ, ಎಲ್.ಐ.ಸಿ ಜಯದೇವಪ್ಪ ಶುಭಾಶಯ ಕೋರಿದರು.
ವರದಿ: ಮಂಜು ಗುರುಗದಹಳ್ಳಿ


