ತಿಪಟೂರು: ಇಂದು ಆಯುಧ ಪೂಜೆಯ ಪ್ರಯುಕ್ತ ಶಿವಕುಮಾರ ಸ್ವಾಮೀಜಿ ಸರ್ಕಲ್ (ಹಾಸನ ಸರ್ಕಲ್) ಬಳಿಯ ಭಾಸ್ಕರ್ ಪತ್ರಿಕೆ ಕಚೇರಿಯಲ್ಲಿ ಭಾಸ್ಕರ್ ಯುಟ್ಯೂಬ್ ಚಾನೆಲ್ ಮತ್ತು ಭಾಸ್ಕರ್ ಪತ್ರಿಕಾ ಬಳಗದ ವತಿಯಿಂದ ಆಯುಧ ಪೂಜೆಯನ್ನು ಶ್ರೀಮತಿ ಗೀತಾ ಭಾಸ್ಕರ್ ಮತ್ತು ಭಾಸ್ಕರಾ ಪತ್ರಿಕೆಯ ಪ್ರಧಾನ ಸಂಪಾದಕರಾದ ಡಾ.ಭಾಸ್ಕರ್ ಅವರ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು, ಪತ್ರಿಕಾ ಬಳಗದ ಸದಸ್ಯರುಗಳು ಹಾಜರಿದ್ದು ಪರಸ್ಪರ ಶುಭಾಶಯಗಳು ಕೋರಿ ನಂತರ ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ವಿಜಯದಶಮಿಯ ಹಾರ್ದಿಕ ಶುಭಾಶಯಗಳನ್ನು ಕೋರಲಾಯಿತು.
ಕೊನೆಯಲ್ಲಿ ಎಲ್ಲರಿಗೂ ಸಿಹಿ ಹಂಚಲಾಯಿತು.

