ತರಿಕೆರೆಯ ಪೂರ್ವ ಸಮಾಲೋಚನಾ ಸಭೆಗೆ ಆಹ್ವಾನ

ಭಾಸ್ಕರ ಪತ್ರಿಕೆ
0





ತಿಪಟೂರು: ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ಯಮಟ್ಟದ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣೋತ್ಸವ & ಸಂಘದ 5ನೇ ವರ್ಷದ ವಾರ್ಷಿಕೋತ್ಸವ, ವಿಶ್ವಕರ್ಮ ಜನಜಾಗೃತಿ ಸಮಾವೇಶ ಇವೆಲ್ಲದರ ಜೊತೆ ವಿಶ್ವಕರ್ಮ ಪಂಚ ವೃತ್ತಿಳಲ್ಲಿ ಅಮೋಘ ಸಾಧನೆಗೈದಿರುವ ಸಾಧಕರಿಗೆ ಹಾಗೆಯೇ ವಿವಿಧ ಕ್ಷೇತ್ರಗಳಲ್ಲಿ ಸಾಧನರಗೈದಿರುವ ಮಹಿಳಾ ಸಾಧಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ವಿಜೃಂಭಣೆಯಿಂದ ನಡೆಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ, ಇದರ ಅಂಗವಾಗಿ ಪೂರ್ವಸಿದ್ಧತೆಯ ಸಮಾಲೋಚನಾ ಸಭೆಯನ್ನು ಚಿಕ್ಕಮಗಳೂರು ಜಿಲ್ಲಾ ವಿಶ್ವ ಬ್ರಾಹ್ಮಣ ಸಂಘ (ರಿ) ಇವರ ಆಶ್ರಯದಲ್ಲಿ ಜಿಲ್ಲಾ-ತಾಲ್ಲೂಕು ಅಧ್ಯಕ್ಷರುಗಳ ಸಮ್ಮುಖದಲ್ಲಿ ದಿನಾಂಕ 08/12/2024ನೇ ಭಾನುವಾರ ಬೆಳಿಗ್ಗೆ 11:00 ಗಂಟೆಗೆ ಶ್ರೀ ಕಾಳಿಕಾದೇವಿ ದೇವಸ್ಥಾನ ಆಚಾರ್‌ ಬೀದಿ, ತರಿಕೆರೆ ಟೌನ್‌, ತರಿಕೆರೆ ಇಲ್ಲಿ ಪೂರ್ವ ಸಮಾಲೋಚನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ, ಇದರ ಆಹ್ವಾನ ಪತ್ರಿಕೆಯನ್ನು ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷರಾದ ಎಂ.ಸೋಮಶೇಖರ್‌ (ಕನ್ನಡಸೋಮು), ಸಂಘದ ಸಂಘಟನಾ ಕಾರ್ಯದರ್ಶಿ ಎಸ್‌. ಸುರೇಶಾಚಾರ್‌, ಸಂಘದ ಪ್ರಚಾರ ಸಮಿತಿ ರಾಜ್ಮಯಾಧ್ಯಕ್ಷರು ಮತ್ತು ಭಾಸ್ಕರ ಪತ್ರಿಕೆ ಪ್ರಧಾನ ಸಂಪಾದಕರಾದ ಭಾಸ್ಕರಾಚಾರ್‌, ಸಮಾಜದ ಹಿರಿಯ ಮುಖಂಡರಾದ ವೇದಮೂರ್ತಾಚಾರ್‌, ಭಾಸ್ಕರ ಟಿವಿ ಯೂಟ್ಯೂಬ್‌ ವಾಹಿನಿಯ ಸುದ್ದಿ ವಾಚಕರಾದ ಶ್ರೀಮತಿ ಶುಭ ವಿಶ್ವಕರ್ಮರವರ ಸ್ವಗೃಹಕ್ಕೆ ತೆರಳಿ ಆಹ್ವಾನ ನೀಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0ಕಾಮೆಂಟ್‌ಗಳು

Please Select Embedded Mode To show the Comment System.*