ತಿಪಟೂರು: ನಗರದ ನಂದಿನಿ ಡೈರಿ ಹತ್ತಿರ ಸಂಘದ ಕಚೇರಿ ಮುಂಭಾಗ ಅಂಬೇಡ್ಕರ್ ಅವರ 68ನೇ ವರ್ಷದ ಪುಣ್ಯಸ್ಮರಣೆ ಪರಿ ನಿರ್ಮಾಣ ದಿನವನ್ನು ಅಂಬೇಡ್ಕರ್ ಅವರ ಭಾವಚಿತ್ರ ಮುಂಭಾಗ ದೀಪ ಹಚ್ಚಿ ಪುಷ್ಪ ನಮನ ಸಲ್ಲಿಸಿ ಎರಡು ನಿಮಿಷ ಮೌನ ಆಚರಿಸಿ ಮಾತನಾಡಿದ ಸಂಘದ ಗೌರವ ಅಧ್ಯಕ್ಷರಾದ ಡಾ. ಭಾಸ್ಕರ್ ರವರು ಬಾಬಾ ಸಾಹೇಬರ ಆದರ್ಶ ಹಾಗೂ ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಾಂತರ ಮಂದಿ ನೆಮ್ಮದಿಯ ನಿಟ್ಟಿಸಿರು ಬಿಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ. ತಾಲೂಕು ಅಧ್ಯಕ್ಷ ಟಿ ರಾಜು ಪ್ರಧಾನ ಕಾರ್ಯದರ್ಶಿ ಧರಣೇಶ ಕುಪ್ಪಾಳು. ಪತ್ರಕರ್ತರಾದ ಗುರುಗದಹಳ್ಳಿ ಮಂಜು. ಹಾಲ್ಕುರ್ಕೆ ಮಂಜು. ಓಂಕಾರ ಮೂರ್ತಿ. ನಾಗರಾಜು ಕರಿಕೆರೆ ಉಮೇಶ್. ಸೇರಿದಂತೆ ಪ್ರಮುಖ ಮುಖಂಡರುಗಳು ಅಭಿಮಾನಿಗಳು ಹಾಜರಿದ್ದರು.
