ತಿಪಟೂರು: ನಗರದ ಗುರುಕುಲ ವಿದ್ಯಾ ಸಂಸ್ಥೆಯ ಪ್ರತಿಭೋತ್ಸವ 2025 ಕಾರ್ಯಕ್ರಮ ಇಂದು ಫೆಬ್ರವರಿ 12ರಂದು ಹಮ್ಮಿಕೊಳ್ಳಲಾಗಿದೆ, ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿಡ್ಲೆಹಳ್ಳಿ ಮಹಾಸಂಸ್ಥಾನ ಮಠ ಶ್ರೀ ಗುರುಕುಲಾನಂದಾಶ್ರಮದ ಸದ್ಗುರು ಶ್ರೀ ಇಮ್ಮಡಿ ಕರಿಬಸವ ದೇಶಿ ಕೇಂದ್ರ ಮಹಾಸ್ವಾಮಿಜಿ ವಹಿಸಲಿದ್ದಾರೆ,ಕಾರ್ಯಕ್ರಮದ ಉದ್ಘಾಟನೆಯನ್ನು ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನ ಉಪನ್ಯಾಸಕರಾದ ಪ್ರೊಫೆಸರ್ ಲೋಕೇಶ್ವರಯ್ಯ ಮಾಡಲಿದ್ದು,
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪೊಲೀಸ್ ಉಪಾಧಿಕ್ಷಕರಾದ ವಿನಾಯಕ ಶೆಟ್ಟಿಗೇರಿ, ಜಿಲ್ಲಾ ಕಾಂಗ್ರೆಸ್ ಯುವ ಅಧ್ಯಕ್ಷರಾದ ನಿಖಿಲ್ ರಾಜಣ್ಣ, ಶೇಖರ್ ಆಸ್ಪತ್ರೆಯ ಡಾಕ್ಟರ್ ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಚಂದ್ರಯ್ಯ, ವಿಶೇಷ ಆಹ್ವಾನಿತರಾಗಿ ಪತ್ರಕರ್ತ ಪ್ರಶಾಂತ್ ಕರಿಕೆರೆ,ನ್ಯೂ ತುಮಕೂರು ಟೈಮ್ಸ್ ನ ಸಮಸ್ಥಾಪಕರಾದ ಟಿ.ಬಿ.ರೇಣುಕಾ ಪ್ರಸಾದ್,(ಸ್ವಾಮಿ ತಿಮ್ಲಾಪುರ)ತಡಸೂರಿನ ಪ್ರಗತಿಪರ ಕೃಷಿಕರಾದ ಯೋಗಾನಂದ ಮೂರ್ತಿ ಭಾಗವಹಿಸಲಿದ್ದಾರೆ.
