| ಕಲ್ಪತರು ನಾಡಿಗೆ ಕಿತ್ತೂರು ರಾಣಿ ಚನ್ನಮ್ಮನವರ 200ನೇ ವಿಜಯ ಜ್ಯೋತಿ ರಥಯಾತ್ರೆ ಬರಮಾಡಿಕೊಂಡ ಸಂಧರ್ಭ |
ತಿಪಟೂರು: ಇಂದು ನಗರದ ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ (ಹಾಸನ ಸರ್ಕಲ್)ಗೆ ಕಿತ್ತೂರು ರಾಣಿ ಚನ್ನಮ್ಮನವರ 200ನೇ ವಿಜಯ ಜ್ಯೋತಿ ರಥಯಾತ್ರೆ ಆಗಮಿಸಿದ್ದು, ಈ ರಥಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಕಾರ್ಯದರ್ಶಿಯಾದ ಶಾರದಮ್ಮ, ಭಾಸ್ಕರ ಪತ್ರಿಕೆ ಪ್ರಧಾನ ಸಂಪಾದಕರಾದ ಡಾ. ಭಾಸ್ಕರ್, ಪ್ರಾಂಶುಪಾಲರಾದ ಎಮ್.ಡಿ ಶಿವಕುಮಾರ್, ದಿವಾಕರ್, ರಂಗಭೂಮಿ ಕಲಾವಿದರಾದ ಬಸವರಾಜು, ಶ್ರೀಮತಿ ರಾಜೇಶ್ವರಿ ಸ್ವಾಗತಿಸಿದರು. ನಂತರ ತಾಲೂಕು ಆಡಳಿತ ಕಛೇರಿಯ ಆವರಣದಲ್ಲಿ ದಂಡಾಧಿಕಾರಿಗಳಾದ ಪವನ್ ಕುಮಾರ್, ಆಡಳಿತ ಅಧಿಕಾರಗಳು, ಪಧಾಧಿಕಾರಿಗಳು ಮತ್ತು ಸ್ಥಳಿಯರು ಸೇರಿ ವಿಜಯ ಜ್ಯೋತಿ ರಥಯಾತ್ರೆಗೆ ಸ್ವಾಗತ ಕೋರಿದರು.
ವರದಿ: ಶುಭ ವಿಶ್ವಕರ್ಮ
